ವಚನ - 456     
 
ಕುಲಜ ಅಕ್ಕುಲಜರು ಜಾತ್ಯಜಾತರು ಬಂದು ಕರಂಗಳ ಮುಗಿಯಲೊಡನೆ ಕರಗಳ ಮುಗಿವುತಿಪ್ಪಡೆ ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.