ವಚನ - 545     
 
ಜ್ಞಾನಿಗಳು ತಾವಾದ ಬಳಿಕ ತ್ರಿಕಾಲ ಲಿಂಗವ ಪೂಜಿಸಬೇಕು. ಜ್ಞಾನಿಗಳು ತಾವಾದ ಬಳಿಕ ಜಂಗಮ ದಾಸೋಹದಲ್ಲಿರಬೇಕು. ಜ್ಞಾನಿಗಳು ತಾವಾದ ಬಳಿಕ ನುಡಿಕೊಟ್ಟು ತಪ್ಪಬಾರದು ಕಪಿಲಸಿದ್ಧಮಲ್ಲಿಕಾರ್ಜುನಾ.