ವಚನ - 100     
 
ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ ಕಾಯದ ಸುಖವ ನಾನೇನೆಂದರಿಯೆನು. ಆರು ಸೋಂಕಿದರೆಂದರಿಯೆನು. ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ ಹೊರಗೇನಾಯಿತ್ತೆಂದರಿಯೆನು.