ವಚನ - 635     
 
ದುರಿತಘರಟ್ಟಂಗೆ ಧೂಪಾರತಿಯನು ಕೊಡುವ ಪುರಾತರು ಕೇಳಿರಯ್ಯಾ ಹೋಗು ಹೋಗೆಂಬ ಬೀಸಣಿಗೆ ಅಡಗಡಗೆಂಬ ಘಂಟೆಯ ಸಬುದಕ್ಕೆ ತೆರಳ್ದೋಡಿಹೋದವು ಪಾಪಂಗಳು. ಪಾಪಿಯ ಪಾದ ಬಂದರಸಿ ಕೊಂಡೊಯ್ದವು ಕಪಿಲಸಿದ್ಧಮಲ್ಲಿನಾಥನೊಲ್ಲದವರ.