ವಚನ - 660     
 
ಧಾತುವ ಮೀರಿದ್ದ ಬಣ್ಣವ, ಅಜಾತ ನಿನ್ನ ಕೂಟವ, ಆರಿಗಯ್ಯಾ ಭೇದಿಸಲಕ್ಕು? ಅಭೇದ್ಯ ಕಾರಣ ಶಿವನೇ, ಆದಿ ಅಕ್ಷರದಲ್ಲಿ ಅಮೋದದಾನತದ ಭೇದವ ಆ ಭೇದವ ಭೇದಿಸಲಾಹುದೆ ಕಪಿಲಸಿದ್ಧಮಲ್ಲಿಕಾರ್ಜುನಾ.