ವಚನ - 661     
 
ಧ್ಯೇಯಕ್ಕೆ ಅತಿರೂಪು ದಾಯನುಂಗಿಪ್ಪುದೀ ತಾನೊಂದು ರೂಪಾಗಿ ದಾಯವಿಲ್ಲದೆ ಇಪ್ಪುದು. ಅದು ನಿಹಿತ ತಾನು ದಾಯವು ವಾಯವು ಕಾಯಕ್ಕೆ ಅತಿ ಬ್ರಹ್ಮವಾಯದಿಂದರಿಯಲ್ಕೆ. ಸುಲಭ ತಾನೆ ಕಾಳದಲಿ ಧವಳತೆಯ ಸಾನಂದದನ್ವತೆಯ ಸಾಯದೆ ಸತ್ತಾತ ಕಂಡನಿದನು. ಕಂಡು ಬ್ರಹ್ಮಾಂಡವನು ಉಂಡನದನನ್ವಯದ ಮಂಡಲಕ್ಕದು ಕರ ಚೋದ್ಯ. ತಾನು ಕಂಡು ಕಾಣದೆ ಈಗ ಉಂಡು ಉಣ್ಣದೆ ಈಗ ಕಂಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.