ವಚನ - 708     
 
ನಿರ್ವಾಣ ಹೋಹರ ಕಂಡರೆ ಅವರನರಿವ ಕೇಳಿರಣ್ಣಾ. ಕ್ರೋಧ-ಲೋಭ-ಹರುಷಾದಿವೆರಸಿಹರ ಕಾಣೆವಣ್ಣಾ. ಅಯ್ಯಾ, ಆನೀಸುವೆರಸಿ ನಿರ್ವಾಣಿಯೆಂದರೆ, ಕಪಿಲಸಿದ್ಧಮಲ್ಲಿನಾಥಯ್ಯನು ನಗುವನಯ್ಯಾ.