ವಚನ - 789     
 
ಫಲವ ಮೀರಿದ ಪದವು, ಪದವ ಮೀರಿದ ಸೀಮೆ, ಫಲಪದಕೆ ದೂರವಾಗಿಯೆ ಚಿತ್ರಿಸಿ ಕರುಣವ ಹಿಡಿದಾಚಾರ್ಯ ಕರುಣಶುದ್ಧತೆಯಿಂದ ತರುಣಿಯ ಮಸ್ತಕದ ಸಿಂಹಾಸನಾ ಕಾಲಕರ್ಮವ ಕಳೆದು ಬೆಳಗು ಬೆಳಗಿನಲೀಗ ತಿಳಿದ ಬ್ರಹ್ಮಾಂಡದಾ ಸೊಮ್ಮು ಭಕ್ತಿ ವೀರಮಾಹೇಶ್ವರವು ಆರಿಗಾಗದು ದೇವ, ಸೋಹಮೆಂಬುದಕ್ಕತ್ಯತಿಷ್ಠ ಕಾನನದ ಕಾವೋದ ಕಂಬನಿಯ ಭಾನು ತಾ ಕಪಿಲಸಿದ್ಧಮಲ್ಲೇಶ್ವರಾ.