ವಚನ - 985     
 
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯ ಆದ ಷಷ್ಠಮ ಬ್ರಹ್ಮವನು ಜಪಿಸುವ ಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ ನಿತ್ಯ. ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿ ಮೂದೇವರಿಗೆ ದೀಕ್ಷೆಮಾಡಲೆಂದು, ಕಪಿಲಸಿದ್ಧಮಲ್ಲಿಕಾರ್ಜುನಾ.