ವಚನ - 1018     
 
ಶ್ರೀವಿಭೂತಿ ರುದ್ರಾಕ್ಷಿಯನು ಧಾತಪ್ಪ ಬಸವಾಕ್ಷರತ್ರಯವನಾರಯ್ಯ ಅರಿದು ಉಚ್ಚರಿಸುವರು ಅವರಂಘ್ರಿಯಂಬುಜದಾಮೋದಭ್ರಮರ ಆನಯ್ಯ. ಅವರು ಆ ನಾದಬ್ರಹ್ಮವು ತಾವಾಗಿಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.