ವಚನ - 1091     
 
ಸುರುಚಿರ ಸ್ಥಾನದಲ್ಲಿ ಮೂರು ಗುಂಡನಿಟ್ಟು ಸುಡುತೈದಾರೆ ಕಾಯ ಕರಣೇಂದ್ರಿಯ ಗುಣಂಗಳ ಹುಳ್ಳಿಯ ಮಾಡಿ. ಕಾಯ ಕರಣೇಂದ್ರಿಯಗಳ ಹುಳ್ಳಿ ಸವೆದು ಅಜಲೋಕವ ತಾಗಿ, ಅಲ್ಲಿರ್ದ ಶ್ವೇತಜಲ ಪ್ರವಾಹವಾಗೆ, ಅದನುಂಡು, ನಿತ್ಯಮಹೋತ್ಸಾಹನಾದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.