ವಚನ - 1166     
 
ಪರುಷ ಸೋಂಕಿದ ಬಳಿಕ ಕಾರ್ಬೊನ್ನದ ಕೇಡು ನೋಡಿರಯ್ಯಾ, ಜ್ಯೋತಿ ಸೋಂಕಿದ ಬಳಿಕ ತಮಂಧದ ಕೇಡು ನೋಡಿರಯ್ಯಾ. ಅಮೃತ ಸೋಂಕಿದ ಬಳಿಕ ರೋಗದ ಕೇಡು ನೋಡಿರಯ್ಯಾ. ನಮ್ಮ ಕಪಿಲಸಿದ್ಧಮಲ್ಲನ ಸೋಂಕಿದ ಬಳಿಕ ಭವದ ಕೇಡು ನೋಡಿರಯ್ಯಾ.