ವಚನ - 1168     
 
ಜ್ಞಾನವಿಡಿದಾಚರಿಸಿದರಲ್ಲದೆ, ಕ್ರೀವಿಡಿದಾಚರಿಸಲಿಲ್ಲವು. ಕ್ರೀವಿಡಿದಾಚರಿಸಿದರಲ್ಲದೆ, ಜ್ಞಾನವಿಡಿದಾಚರಿಸಲಿಲ್ಲವು. ರೂಪುವಿಡಿದು ನಿರೀಕ್ಷಿಸುವರಲ್ಲದೆ, ಅರೂಪವಿಡಿದು ನಿರೀಕ್ಷಿಸರು. ಜ್ಞಾನಕ್ರಿಯೆವಿಡಿದಾಚರಿಸಿದರು ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಚೆನ್ನ ಬಸವಣ್ಣನವರು.