ವಚನ - 1172     
 
ಭಕ್ತನಾದ ಬಳಿಕ ಭಕ್ತಿಸ್ಥಲವಳವಡುವುದೆ ದುರ್ಲಭ. ಮಹೇಶನಾದ ಬಳಿಕ ಮಹೇಶಸ್ಥಲವಳವಡುವುದೆ ದುರ್ಲಭ. ಭಕ್ತಸ್ಥಲ ಬಸವಣ್ಣಂಗಾಯಿತ್ತು; ಮಹೇಶಸ್ಥಲ ಚೆನ್ನಬಸವಣ್ಣಂಗಾಯಿತ್ತು. ಮೀರಿದ ಸ್ಥಲ ನಮ್ಮ ಪ್ರಭುವಿಂಗಾಯಿತ್ತು. ಕಪಿಲಸಿದ್ಧಮಲ್ಲಯ್ಯ, ಎನಗಿನಿತೊಂದೊರೆವ ಪರಿ ?