ವಚನ - 1196     
 
ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ. ಘಟ್ಟಿವಾಳಯ್ಯ ತನ್ನ ಮಾಯೆಯ ಕೊಟ್ಟು, ಮೂಲಪ್ರಸಾದವ ಪಡೆದ. ಮರುಳಸಿದ್ಧಯ್ಯ ತನ್ನ ಮನವ ಕೊಟ್ಟು, ಗಣಪ್ರಸಾದವ ಪಡೆದ. ನಾನು ಕರಣಾದಿಗಳ ಕೊಟ್ಟು, ಚೆನ್ನಬಸವಣ್ಣನ ಪ್ರಸಾದವ ಪಡೆದು, ಭವವಿರಹಿತನಾದೆ ನೋಡಾ, ಕಪಿಲಸಿದ್ಧಮಲ್ಲಿನಾಥಾ.