ವಚನ - 161     
 
ಕಾಯದ ನುಂಪನೊಬ್ಬ ಕಂಡು ಬಯಸಿದನು. ಅವಂಗೆ ಮಾಂಸವ ಬೆಲೆಮಾಡಿಕೊಡುವೆನು. ಎನ್ನ ಪ್ರಾಣದೊಡೆಯಂಗೆ ಎನ್ನ ಹೃದಯವ ಸೂರೆಗೊಡುವೆನು. ಚೆನ್ನಮಲ್ಲಿಕಾರ್ಜುನದೇವಯ್ಯನು ಮುನಿದು ಭವಿಗೆ ಮಾರಿದಡೆ ಹೊಲಬುಗೆಡದಿರಾ ಮನವೆ.