ವಚನ - 1235     
 
ಎಲೆ ಅಯ್ಯಾ ಅಯ್ಯಾ, ಎನ್ನ ಶಿರ ನಿಮ್ಮ ಚರಣವ ಮುಟ್ಟಿದ ಬಳಿಕ ಎನ್ನಲ್ಲಿ ಗುಣದೋಷವನರಸುವರೆ ? `ಭೃತ್ಯಾಪರಾಧಃ ಸ್ವಾಮಿನೋ ದಂಡಃ' ! ಕಪಿಲಸಿದ್ಧಮಲ್ಲಿಕಾರ್ಜುನದೇವಾ, ತ್ರಾಹಿ ತ್ರಾಹಿ, ಕಾಯಯ್ಯಾ.