ವಚನ - 1474     
 
ಬಂದಲ್ಲುಪಚರಿಸುವುದಲ್ಲದೆ, ನಿಂದ ನಿಂದುಲ್ಲುಪಚರಿಸುವುದು ಭಕ್ತಿಯ ಕೊಂಕು ನೋಡಯ್ಯಾ. ಉಪಚಾರಕ್ಕೆ ಬಂದಾತ ಜಂಗಮನಲ್ಲ ನೋಡಯ್ಯಾ; ಉಪಚರಿಸಿದವ ಭಕ್ತನಲ್ಲ. ಅನುಭವಕ್ಕೆ ಬಂದಿಹನಯ್ಯಾ ಜಂಗಮನು, ಅನುಭವಕ್ಕೆ ಮಾಡುವನಯ್ಯಾ ಉಪಚಾರವ ಭಕ್ತನು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.