ವಚನ - 1580     
 
ವಿಕಾರಿಣ್ಯಾಂ ತಸ್ಯಾಂ ಎಂಬ ಶ್ರುತಿ ಪ್ರಸಿದ್ಧವು. ವಿಕಾರ ಪ್ರಕೃತಿಯಲ್ಲಲ್ಲದೆ ಪುರುಷನಲ್ಲಿಲ್ಲವಯ್ಯಾ. ಪುರುಷನಿಲ್ಲದಿರೆ ಪ್ರಕೃತಿಯ ಕರ್ಮ ನಡೆಯದಯ್ಯಾ. ಸೂರ್ಯಕಿರಣದಿಂದಾಗ ಜಲದಲ್ಲಿ ಸೂರ್ಯಬಿಂಬವಿರೆ, ನಿಜ ಸೂರ್ಯನ ರೂಹು ಕೆಡದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.