ವಚನ - 1629     
 
ಒಂದನೆಯ ಬೀಜ ಬಿತ್ತಿ ಬೆಳೆಯದಲೆ ಬೆಳೆಯಿತ್ತು. [ಎರಡನೆಯ ಬೀಜ ಸೃಷ್ಟ್ಯುನ್ಮುಖವಾಯಿತ್ತು.] ಮೂರನೆಯ ಬೀಜ ಅಲ್ಲಲ್ಲಿ ಜನಿಸಿತ್ತು. ನಾಲ್ಕನೆಯ ಬೀಜ ಮರ್ತ್ಯದಲ್ಲಿ ಜನಿಸಿ ಅಂಕುರಿಸಿತ್ತು. ಐದನೆಯ ಬೀಜ ಇದ್ದು ಇದ್ದು ಅಂಕುರಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.