ವಚನ - 1630     
 
ಮೂರನೆಯ ಬೀಜ ಐದನೆಯ ಬೀಜ ಒಂದೆ ನೋಡಯ್ಯಾ. ಅದೇನು ಕಾರಣ ತಂದೆಯೆಂದಡೆ ಅರಿಯದೆ ಬೆರೆದುದು ಉಭಯಕರ್ಮದಲ್ಲಿ ಇದರನುಭವ. ಅರಿದು ಬೆರೆಯದವ ಬರಿಯ ಅರುಹಿನ ಕುರುಹು, ಕಪಿಲಸಿದ್ಧಮಲ್ಲಿಕಾರ್ಜುನನೆಂದು ಕಾಂಬೆ.