ವಚನ - 1642     
 
ಸೂಕ್ಷ್ಮವದು ಮೊದಲಲ್ಲೆ ನಿರ್ವಯಲವಯ್ಯಾ. ಸ್ಥೂಲವದು ಅಂದಂದಿಂಗೆ ನಿರ್ಮಲ ನೋಡಯ್ಯಾ. ಅರವೇಷಿ ತಿರುಗುವ ಊರ ತೊಳೆಯಲೆ ಬೇಕು. ಅಂತರಂಗ ಬಹಿರಂಗದಲ್ಲಿ ನಿರ್ಮಲ ಸದಾಚರಣೆಯೆ ಬೇಕು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.