ವಚನ - 1788     
 
ಕುಲದಲ್ಲಿ ಶೂದ್ರನಾದಡೇನು ಮನದಲ್ಲಿ ಮಹಾದೇವ ನೆಲೆಗೊಂಡವನೆ ವೀರಶೈವ ನೋಡಾ. ``ಕಾಂಚನಂ ರಜತಂ ತಾಮ್ರಂ ರಸಯೋಗಾತ್ಸುವರ್ಣತಾಂ ತಥಾ ಶಿವಜ್ಞಾನರಸಾಚ್ಛೂದ್ರಃ ಸದ್ಯಃ ಶಿವತಾಂ ವ್ರಜೇತ್||" ಎಂಬುದು ಸಟೆಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.