ವಚನ - 1821     
 
ವಾಙ್ಮನಕ್ಕಗೋಚರ ವಸ್ತುವೆಂದರಿದ ಬಳಿಕ, ವಾಕ್ಯದಿಂದಾಗದು, ಮನದಿಂದಾಗದು. ಅರಿದ ಅರಿವಿನಿಂದ ನೆನೆದು, ನಿರಾಕಾರ ನಿಜವಸ್ತು ನಿರ್ಮಲ ಶುದ್ಧ ಶಬಲಾಂಶ ತಾನಾಗಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.