ವಚನ - 304     
 
ಬೋಳೆಯನೆಂದು ನಂಬಬೇಡ, ಢಾಳಕನವನು ಜಗದ ಬಿನ್ನಾಣಿ. ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ ಮಲುಹಣರವರಿಗಿತ್ತ ಪರಿ ಬೇರೆ. ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.