ವಚನ - 319     
 
ಮನ ಬೀಸರವಾದಡೆ ಪ್ರಾಣ ಪಲ್ಲಟವಹುದವ್ವಾ. ತನು ಕರಣಂಗಳು ಮೀಸಲಾಗಿ ಮನ ಸಮರಸವಾಯಿತ್ತು ನೋಡಾ. ಅನ್ಯವನರಿಯೆ ಭಿನ್ನವನರಿಯೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಬಳಿಯವಳಾನು ಕೇಳಾ ತಾಯೆ.