ವಚನ - 196     
 
ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ ಸಂಚದೋವರಿಯೊಳಗೆ; ರುಚಿಗಳೆಲ್ಲವ ನಿಲಿಸಿ ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ, ವಚನ ವಿಚಿತ್ರದ ಪುಷ್ಪದ ರಚನೆ [ಯ] ನವರಂಗದಲ್ಲಿ, ಖೇಚರಾದಿಯ ಗಮನ. ವಿಚಾರಿಪರ ನುಂಗಿ ಗುಹೇಶ್ವರ ನಿಂದ ನಿಲುವು ಸಚರಾಚರವ ಮೀರಿತ್ತು.