ವಚನ - 200     
 
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಸೋಂಕೆಂಬಿವು ಷಡುಸ್ಥಲದ, ಬಹಿರಂಗದ ಲಾಂಛನವಯ್ಯಾ. ಅಂತರಂಗದಲ್ಲಿ ನಾಲ್ಕು ಸ್ಥಲ; ಅವಾವುವೆಂದಡೆ, ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ, ಇಂತೀ ಸ್ಥಾನಂಗಳನರಿಯರಾಗಿ! ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ, ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ, ಅಷ್ಟದಳಕಮಲದಲ್ಲಿ ಸ್ವಾನುಭಾವ ಸ್ವಾಯತ. ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು ಸದಾ ಸನ್ನಿಹಿತರು.