ವಚನ - 232     
 
ಉದಕದಲುತ್ಪತ್ಯವಾದ ಶತಪತ್ರದಂತೆ ಸಂಸಾರಸಂಗವ ತಾ ಹೊದ್ದದಿರಬೇಕು. ಶರಣನ ಕಾಯವೇ ಪೀಠಿಕೆ, ಮನವೇ ಲಿಂಗವಾದ ಬಳಿಕ, ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ? ಗುಹೇಶ್ವರಾ.