ವಚನ - 251     
 
ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ, ಹಿರಿಯರು ಓಗರವ ಮಾಡುತ್ತಿಪ್ಪರು. ಗಿರಿ ಬೇಯದಾಗಿ ಓಗರವಾಗದು. ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ.