ವಚನ - 271     
 
ಗ್ರಾಮಮಧ್ಯದ ಮೇಲಣ ಮಾಮರ, ಸೋಮಸೂರ್ಯರ ನುಂಗಿತ್ತಲ್ಲಾ! ಅಮರಗಣಂಗಳ ನೇಮದ ಮಂತ್ರ, ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ! ಸುಮನ ಸುಜ್ಞಾನದೊಳಗಾಡುವ ಮಹಾಮಹಿಮ ಶರಣಂಗೆ, ನಿರ್ಮಳವಾಯಿತ್ತು ಗುಹೇಶ್ವರಾ.