ಆದಿಯ ಶರಣನೊಬ್ಬನ ಮದುವೆಯ ಮಾಡಲು,
ಯುಗ ಜುಗದವರೆಲ್ಲಾ ನಿಬ್ಬಣ ಹೋದರು,
ಹೋದ ನಿಬ್ಬಣಿಗರು ಮರಳರು!
ಮದುವಣಿಗನ ಸುದ್ದಿಯನರಿಯಲು ಬಾರದು.
ಹಂದರವಳಿಯದು, ಹಸೆ ಮುನ್ನಲುಡುಗದು!
ಬಂದಬಂದವರೆಲ್ಲಾ ಮಿಂದುಂಡು ಹೋದರು.
ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು
ಇದರಂತುವನರಿದಡೆ
ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು!
Transliteration Ādiya śaraṇanobbana maduveya māḍalu,
yuga jugadavarellā nibbaṇa hōdaru,
hōda nibbaṇigaru maraḷaru!
Maduvaṇigana suddiyanariyalu bāradu.
Handaravaḷiyadu, hase munnaluḍugadu!
Bandabandavarellā minduṇḍu hōdaru.
Idarantuvanariyade jagavella baraḍāyittu
idarantuvanaridaḍe
guhēśvaraśabdavanoḷakoṇḍa mahanta bayalu!
Hindi Translation आदि शरण का विवाह करने
युगयुग के लोग बारत में गये।
गये बाराती नहीं लौटते।
दूल्हे का समाचार न जानना।
मंटप न मिठता, पीठ न उठाया
आये आये लोग स्नान भोजन कर चले।
इसका रहस्य न जाने दुनिया निस्सार बन गयी।
गुहेश्वर नामक शब्द का महंत अबशून्य में मिला है!
Translated by: Eswara Sharma M and Govindarao B N
Tamil Translation ஆதிலிங்கம் சரணனின் திருமணத்திற்கு
யுகயுகமாக சரணனுடனிருந்தோர் அவனுடன் சென்றனர்.
உடன் சென்றோர் மீண்டும் வருவதில்லை
ஆதிலிங்கத்தைச் சொற்களால் விவரிக்கவியலுமோ?
பந்தல் மறையாது, ஞானமெனும் மணப்பலகை அழியாது
அவ்வப்பொழுது வந்தவர்கள் அமைதியடைந்து மறைந்தனர்.
இலிங்கம்-சரணனின் உண்மை சொரூபத்தை அறியாது
உலகமெலாம் சாரமற்றதாயிற்று
குஹேசுவரனுடன் ஒருமித்த சரணன் வயலானான்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂತವನು = ನಿಜವಾದ ಸ್ವರೂಪವನು, ಮಹಿಮೆಯನು; ಅರಿಯದೆ = ತಿಳಿದು ಸಾಧಿಸಲಾಗದೆ; ಅಳಿಯದು = ಇಲ್ಲದಾಗದು; ಆದಿಯ = ವಿಶ್ವದ ಆದಿಯಲ್ಲಿರುವ ಮಹಾಲಿಂಗದ; ಇದರ = ಈ ಲಿಂಗ ಹಾಗೂ ಶರಣನ ಸಮಾವೇಶದ; ಗುಹೇಶ್ವರನೆಂಬ ಶಬ್ದವ = ಲಿಂಗದ ಸ್ವರೂಪವನು ಅಂಗವಿಸಿಕೊಂಡ; ಜಗವೆಲ್ಲ = ಲೋಕವೆಲ್ಲ; ನಿಬ್ಬಣಹೋದರು = ಲಿಂಗದೇವನ ನೆಲೆಯತ್ತ ಶರಣನೊಂದಿಗೆ ಸಾಗಿಹೋದರು; ಬಂದಬಂದವರು = ಆಗಾಗ ಕಾಣಬಂದ ವಿಭಿನ್ನ ಭಾವಗಳು, (ನಾನು ಭಕ್ತ, ನಾನು ಮಾಹೇಶ್ವರ ಇತ್ಯಾದಿ); ಬಯಲು = ಲಿಂಗ ಸಮರಸ; ಬರಡಾಯಿತ್ತು = ಬಡವಾಯಿತ್ತು, ಬಳಲಿ ಬೆಂಡಾಯಿತ್ತು; ಮದುವಣಿಗ = ಮಹಾಲಿಂಗ; ಮದುವೆಯ ಮಾಡಲು = ಸಂಧಾನಗೊಳಿಸಲು; ಮರಳರು = ಹಾಗೆ ಹೋದ ಕರಣಂಗಳು ಲಿಂಗಕರಣಂಗಳಾಗಿ ಮಾರ್ಪಡುವುದರಿಂದ ಅವರು ಮತ್ತೆ ವಿಷಯಮುಖರಾಗರು; ಮಹಂತ = ಅನುಭಾವಿ ಶರಣ; ಮಿಂದುಂಡು ಹೋದರು = ಶಾಂತವಾದವು ಮೂಡಿ ಮರೆಯಾದವು; ಮುನ್ನ ಉಡುಗದು = ಮರೆಯಾಗುವುದೆ ಇಲ್ಲ; ಯುಗಜುಗದವರೆಲ್ಲ = ಯುಗಯುಗಗಳಿಂದ ಆ ಶರಣನೊಂದಿಗಿರುವ ಅಂತಃಕರಣಗಳೆಂಬ ಆಪ್ತೇಷ್ಟರೆಲ್ಲ; ಶರಣನ = ಶಿವಯೋಗಸಾಧಕನಾದ ಶರಣನ; ಸುದ್ದಿಯನರಿಯಬಾರದು = ಎದುರಿಟ್ಟು ನೋಡಬರದು, ಶಬ್ದಕ್ಕೆ ನಿಲುಕದು, ವೃತ್ತಿಜ್ಞಾನಕ್ಕೆ ವಿಷಯವಾಗದು; ಹಂದರ = ಮಂಟಪ, ಪರಿಪೂರ್ಣಭಾವ; ಹಸೆ = ಮಣೆ, ಸುಜ್ಞಾನಹಸ್ತ;
Written by: Sri Siddeswara Swamiji, Vijayapura