ವಚನ - 410     
 
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ, ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ. ಒಳಗು ಹೊರಗು ಹೊರಗು ಒಳಗೆಂಬ ಉಭಯವು ಏಕಾರ್ಥವಾಯಿತ್ತು, ಇದು ಕಾರಣ ಎನ್ನ ಅಂತರಂಗ ಬಹಿರಂಗ ಸರ್ವಾಂಗವನೊಳಕೊಂಡು ನೀನೆಪ್ಪೆಯಾಗಿ ನಾನೀಂಬ ಭೇದವುಂಟೆ ಗುಹೇಶ್ವರಾ.