ವಚನ - 442     
 
ಮರುಳುಂಡ ಮನುಷ್ಯನ ಇರವಿನ ಪರಿಯಂತೆ, ವಿವರವನರಿಯಬಾರದು ನೋಡಾ, ಶಿವಜ್ಞಾನ. ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು. ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು! ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು, ನಿಸ್ಸೀಮಸುಖಿಗಳು ನೋಡಾ.