ವಚನ - 531     
 
ಶರಣಸಂಬಂಧವನರಿದವನು ಎಂತಿರ್ದಡೇನಯ್ಯಾ? ತಿಳಿದು ನೋಡಿ ನಡೆಯದಿರ್ದಡೆ ಭಕ್ತಿವಿರೋಧ. ತೆರನನರಿದು ಮರವೆಯಳಿದು ಸುಳಿವನಾಗಿ ಉಪಜೀವಿಕನಲ್ಲ ಕೇಳಿರಣ್ಣಾ. ಗುಹೇಶ್ವರನ ಶರಣನ ಸಂಗಸುಖದ ಉರವಣೆಯ ಸೋಂಕು ಲೋಕಕ್ಕೆ ವಿರೋಧ!