ವಚನ - 582     
 
ಅರಿವಿನೊಳಗೊಂದು ಮರವೆಯಿದೆ, ಮರವೆಯೊಳಗೊಂದು ಅರಿವಿದೆ. ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ವಯಲಿದೆ. ತಾನೆಂಬಲ್ಲಿ ನಿಷ್ಪತಿಯಿದೆ. ಇದೇನು ಹೇಳಾ ಗುಹೇಶ್ವರಾ?