ವಚನ - 590     
 
ಆಕಾಶದ ಬೀಜ ಅಗ್ನಿಯಲೊದಗಿ, ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು. ಅರಿದೆಹೆನೆಂಬವನನಾರಡಿಗೊಂಡಿತ್ತು. ಈ ನಿರ್ಣಯವನರಿಯದ ಮಾನವಾ, ಗುಹೇಶ್ವರನೆಂಬುದು ಬಯಲ ವಿಕಾರ!