ವಚನ - 620     
 
ಸ್ಥೂಲವನು ಬ್ರಹ್ಮನಳವಡಿಸಿಕೊಂಡ. ಸೂಕ್ಷ್ಮವ ವಿಷ್ಣುವಳವಡಿಸಿಕೊಂಡ. ಕಾರಣವ ರುದ್ರನಳವಡಿಸಿಕೊಂಡ. ನಿಃಕಾಯವ ಈಶ್ವರನಳವಡಿಸಿಕೊಂಡ. ನಿರಂಜನವ ಸದಾಶಿವನಳವಡಿಸಿಕೊಂಡ. ನಿರವಯವ ವ್ಯೋಮಾತೀತನಳವಡಿಸಿಕೊಂಡ. ಈ ಷಡುಸ್ಥಲದವರೆಲ್ಲ ಬಯಲನಳವಡಿಸಿಕೊಂಡು ಬಯಲಾಗಿ ಹೋದರು ಕಾಣಾ ಗುಹೇಶ್ವರಾ. ನಿಮ್ಮ ಶರಣ ನಿಜಲಿಂಗಾಂಗವಾಗಿರ್ದನು.