ವಚನ - 704     
 
ಅಂಗದಲಪ್ಪಿದೆನೆಂದಡೆ ಸಿಲುಕದು, ಪ್ರಾಣದಲಪ್ಪಿದೆನೆಂದಡೆ ಸಿಲುಕದು, ಭಾವದಲಪ್ಪಿದೆನೆಂದಡೆ ಸಿಲುಕದು, ಸೂಕ್ಷ್ಮತನುವಿನ ಮನದ ಕೊನೆಯ ಮೇಲೆ ಅಪ್ಪಿದೆನೆಂದಡೆ ಸಿಲುಕದು. ಭಾವಾತೀತವಾದ ನಿರಾಕಾರದ ಘನವು ಸುಜ್ಞಾನದ ಮುಖಕ್ಕೆ ಅಸಾಧ್ಯ ನೋಡಾ! ಗುಹೇಶ್ವರನ ಶರಣರನಿನ್ನಾವ ಪರಿಯಲ್ಲಿ ತಡೆದು ನಿಲ್ಲಿಸುವೆ ಹೇಳಾ, ಸಿದ್ಧರಾಮಯ್ಯಾ?