ವಚನ - 725     
 
ಅಂಜಬೇಡ ಅಳುಕಬೇಡ; ಹೋದವರಾರು ಇದ್ದವರಾರು? ಎಲೆ ಮರುಳೆ! ಒಂದು ಮುಖದಲ್ಲಿಪ್ಪ ದೇವನೊಬ್ಬನೆ. ಹಲವು ಮುಖದಲ್ಲಿಪ್ಪ ದೇವನೊಬ್ಬನೆ. ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ! ಮನದೊಳಗಣ ಘನವು ತನುವನಗಲುವುದೆ? ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ.