ವಚನ - 918     
 
ಆವನಾದಡೇನಯ್ಯಾ ಮಾನವನಪ್ಪುದು ಅರಿದಯ್ಯಾ. ಮಾನವನಾಗಿ ಕಿಂಚಿನ್ಮಾತ್ರ ಶಿವಜ್ಞಾನವಿಲ್ಲದಿದ್ದಡೆ ಶ್ವಾನ ಶರೀರವ ಹೊರೆದಂತೆ. ಅವರನರಿದಡೆ ಸುಖವಿಲ್ಲ ಮರೆದಡೆ ದುಃಖವಿಲ್ಲ. ಬದುಕಿದಡೆ ಆಗಿಲ್ಲ, ಸತ್ತಡೆ ಚೇಗಿಲ್ಲ. `ಏನೋ' ಎಂಬ ಸಂದೇಹವಿಲ್ಲ ಗುಹೇಶ್ವರಾ.