ವಚನ - 149     
 
ಕಳನೇರಿ ಇಳಿವುದು ವೀರಂಗೆ ಮತವಲ್ಲ. ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ. ಮನದೊಡೆಯ ಮನವನಿಂಬುಗೊಂಬನಯ್ಯಾ. ಏರಲಾಗದು ಶ್ರೀಪರ್ವತವ; ಏರಿ ಇಳಿದಡೆ ವ್ರತಕ್ಕೆ ಭಂಗ. ಕಳನೇರಿ ಕೈದು ಮರೆದಡೆ ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು.