ವಚನ - 283     
 
ಪೃಥ್ವಿ ಪೃಥ್ವಿಯ ಕೂಡದ ಮುನ್ನ, ಅಪ್ಪು ಅಪ್ಪುವ ಕೂಡದ ಮುನ್ನ, ತೇಜ ತೇಜವ ಕೂಡದ ಮುನ್ನ, ವಾಯು ವಾಯುವ ಕೂಡದ ಮುನ್ನ, ಆಕಾಶ ಆಕಾಶವ ಕೂಡದ ಮುನ್ನ, ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ.