ವಚನ - 299     
 
ಬಿಡು ಬಿಡು ಸಂಗವ, ಸುಡುಸುಡು ವಿಷಯವ, ಎನ್ನೊಡೆಯರು ಬಾಗಿಲಿಗೆ ಬಂದರು, ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ, ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕನರಕ.