ವಚನ - 310     
 
ಭವಿಸಂಗವಳಿದು ಭಕ್ತನಾದ ಬಳಿಕ, ಭಕ್ತಂಗೆ ಭವಿಸಂಗವತಿಘೋರ ನರಕ. ಶರಣಸತಿ ಲಿಂಗಪತಿಯಾದ ಬಳಿಕ, ಶರಣಂಗೆ ಸತಿಸಂಗವು ಅಘೋರನರಕ. ಚೆನ್ನಮಲ್ಲಿಕಾರ್ಜುನಾ, ಪ್ರಾಣಗುಣವಳಿಯದವರ ಸಂಗವೇ ಭಂಗ.