ವಚನ - 312     
 
ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು; ಆನೇವೆನಯ್ಯಾ? ಆಳಿತನದ ಮನ ತಲೆಕೆಳಗಾಯಿತ್ತು; ಆನೇವೆನಯ್ಯಾ? ಬಿಚ್ಚಿ ಬೇರಾಗದ ಭಾವವಾಗೆ, ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.