ವಚನ - 332     
 
ಮಾತಿನ ತರ್ಕವ ಬಿಡದವರ ಆತ್ಮತೇಜಕ್ಕೆ ಬೆರೆವವರ ತಮ್ಮ ತಾವರಿಯದೆ ನುಡಿವವರ ಒಮ್ಮೆಯೂ ನಿಮ್ಮುವನರಿಯದವರ ತನು ಶುದ್ದ ಮನ ಶುದ್ದವಿಲ್ಲದವರ ಅನುಭಾವಿಗಳ ಸಂಗವ ಒಲ್ಲದವರ ಮಾತಿನ ಬಣಬೆಯ ಮಿಟ್ಟಿಯ ಭಂಡರ ತೋರಿದಿಯ್ಯ ಚೆನ್ನಮಲ್ಲಿಕಾರ್ಜುನಾ ನಿಮ್ಮ ಬೇಡಿಕೊಂಬೆನು.