ವಚನ - 339     
 
ಮೂರು ತಪ್ಪ ಹೊರಿಸಿ ಬಂದವಳಿಗೆ ಇನ್ನಾರ ಕೊಂಡು ಕೆಲಸವೇತಕ್ಕೆ? ಹೊಗದಿಹೆನೆ ಹೋಗಿಹೆನೆ, ಜ್ಞಾನಕ್ಕೆ ಹಾನಿ. ಅರೆಗೋಣ ಕೊಯ್ದವನಂತೆ ಇನ್ನೇವೆ? ಈ ಗುಣವ ಬಿಡಿಸಾ ಎನ್ನ ತಂದೆ ಚೆನ್ನಮಲ್ಲಿಕಾರ್ಜುನಾ.