ವಚನ - 213     
 
ತನು ಮೀಸಲಾಗಿ, ಮನ ಮೀಸಲಾಗಿ, ಭಾವವಚ್ಚುಗೊಂಡಿಪ್ಪುದವ್ವಾ. ಅಚ್ಚುಗನ ಸ್ನೇಹ, ನಿಚ್ಚಟದ ಮೆಚ್ಚುಗೆ, ಬೆಚ್ಚು ಬೇರಾಗದ ಭಾವವಾಗೆ ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡಿಪ್ಪನವ್ವಾ.