ವಚನ - 308     
 
ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, ಆನೇವೆನಯ್ಯಾ? ಹಸಿದುಂಡಡೆ ಉಂಡು ಹಸಿವಾಯಿತ್ತು. ಇಂದು ನೀನೊಲಿದೆಯಾಗಿ, ಎನಗೆ ಅಮೃತದ ಆಪ್ಯಾಯನವಾಯಿತ್ತು. ಇದು ಕಾರಣ, ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.